Saturday 30 December 2017

Ramakrishna Paramahamsa

ಶ್ರೀ ರಾಮಕೃಷ್ಣ ಪರಮಹಂಸ (ಫೆಬ್ರವರಿ ೧೮೧೮೩೬ - ಆಗಸ್ಟ್ ೧೬೧೮೮೬ಭಾರತದ ಪ್ರಸಿದ್ಧ ಧಾರ್ಮಿಕ ನೇತೃಗಳಲ್ಲಿ ಒಬ್ಬರು. ಕಾಳಿಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ವೇದಾಂತಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ೧೯ ನೆಯ ಶತಮಾನದ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟ ವ್ಯಕ್ತಿಗಳಲ್ಲಿ ಪರಮಹಂಸರೂ ಒಬ್ಬರು.ಇವರ ಮೊದಲ ಹೆಸರು "ಗಧಾದರ". "ನಮನ"
ಪರಮಹಂಸರ ಜೀವನ ಮತ್ತು ಬೋಧನೆಗಳು ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿವೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಇವರ ಗೌರವಾರ್ಥವಾಗಿಯೇ ಇರುವುದು.



ಪರಮಹಂಸರು ಅನುಭವಿಸಿದರೆಂದು ಹೇಳಲಾದ ನಿರ್ವಿಕಲ್ಪ ಸಮಾಧಿಯಿಂದ ಅವರು "ಅವಿದ್ಯಾಮಾಯೆ" ಮತ್ತು "ವಿದ್ಯಾಮಾಯೆ" ಎಂಬ ಎರಡು ಬಗೆಯ ಮಾಯೆಗಳನ್ನು ಅರಿತುಕೊಂಡರೆಂದು ಹೇಳಲಾಗುತ್ತದೆ. "ಅವಿದ್ಯಾಮಾಯೆ" ಎಂಬುದು ಸೃಷ್ಟಿಯ ಕಾಳ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಕ್ರೌರ್ಯ, ಲೋಭ, ಇತ್ಯಾದಿ). ವಿದ್ಯಾಮಾಯೆ ಎನ್ನುವುದು ಸೃಷ್ಟಿಯ ಉಚ್ಚತರ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಪ್ರೇಮ, ಅಧ್ಯಾತ್ಮಿಕ ದೃಷ್ಟಿ, ಇತ್ಯಾದಿ). ಪರಮಹಂಸರ ದೃಷ್ಟಿಯಲ್ಲಿ ಭಕ್ತರು ವಿದ್ಯಾಮಾಯೆಯಿಂದ ಅವಿದ್ಯಾಮಾಯೆಯನ್ನು ಗೆದ್ದು ನಂತರ ಸಂಪೂರ್ಣವಾಗಿ ಮಾಯಾತೀತರಾಗುವತ್ತ ಹೆಜ್ಜೆ ಹಾಕಬಹುದು.
ನಿರ್ವಿಕಲ್ಪ ಸಮಾಧಿಯಿಂದ ಹುಟ್ಟಿದ ರಾಮಕೃಷ್ಣರ ಇನ್ನೊಂದು ನಂಬಿಕೆಯೆಂದರೆ ಜನರು ನಂಬುವ ಎಲ್ಲ ದೇವರುಗಳೂ ಒಬ್ಬ ಸರ್ವಾಂತರ್ಯಾಮಿಯಾದ ದೇವನನ್ನು ನೋಡುವ ವಿವಿಧ ಬಗೆಗಳಷ್ಟೆ. ಋಗ್ವೇದದ ವಾಕ್ಯವಾದ "ಏಕಮ್ ಸದ್ವಿಪ್ರಾಃ ಬಹುಧಾ ವದಂತಿ" (ಒಂದೇ ಸದ್ವಸ್ತುವನ್ನು ಜನರು ವಿವಿಧ ಹೆಸರುಗಳಿಂದ ಕರೆಯುತ್ತಾರೆ) ಎಂಬ ವಿಚಾರವೇ ಇದು. ಹಾಗಾಗಿ ರಾಮಕೃಷ್ಣರ ದೃಷ್ಟಿಯಲ್ಲಿ ಎಲ್ಲ ಧರ್ಮಗಳೂ ಒಂದೇ - ತಮ್ಮ ಜೀವನದ ಕೆಲ ವರ್ಷಗಳ ಕಾಲ ಇತರ ಧರ್ಮಗಳನ್ನೂ ಅಭ್ಯಾಸ ಮಾಡಿದರು (ಮುಖ್ಯವಾಗಿ ಇಸ್ಲಾಮ್ ಧರ್ಮಕ್ರೈಸ್ತ ಧರ್ಮ, ಹಾಗೂ ವಿವಿಧ ಯೋಗ ಮತ್ತು ತಂತ್ರ ಮಾರ್ಗಗಳು).
ರಾಮಕೃಷ್ಣರ ನಾಲ್ಕು ಮುಖ್ಯ ತತ್ವಗಳೆಂದರೆ:
  • ಎಲ್ಲ ಅಸ್ತಿತ್ವದ ಏಕತೆ
  • ಮಾನವರಲ್ಲಿಯೂ ಇರುವ ದೈವತ್ವ
  • ದೇವರ ಏಕತೆ
  • ಎಲ್ಲ ಧರ್ಮಗಳ ಸಾಮರಸ್ಯ
ರಾಮಕೃಷ್ಣರ ಜೀವನ ಮತ್ತು ಬೋಧನೆಗಳನ್ನು ಅವರ ಶಿಷ್ಯರಲ್ಲಿ ಒಬ್ಬರಾದ ಮಹೇಂದ್ರನಾಥ್ ಗುಪ್ತಾ ರವರು ದಾಖಲಿಸಿದರು.

ಪೊಳಲಿಯಲ್ಲಿದೆ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ದಿವ್ಯ ವಿಶ್ವಭಾವೈಕ್ಯ ಮಂದಿರ

ಪರಶುರಾಮ ಸೃಷ್ಠಿಯ ನಾಡು ಎಂದೇ ಕರೆಯಲ್ಪಡುವ ಪುಣ್ಯಭೂಮಿ ತುಳುನಾಡು. ಹಲವು ಸಂಸ್ಕøತಿಗಳ ಬೀಡು. ಹಲವು ಭಾಷೆ ,ಜಾತಿ, ಧರ್ಮದ ಜನರು ಇರುವ ಈ ಪ್ರಾಂತ್ಯ ಕಂಡು ಬರುವುದು ರಮಣೀಯ ಅರಬ್ಬಿ ಸಮುದ್ರದ ತಟದಲ್ಲಿ. ಅದೇ ಅವಿಭಜಿತ  ಉಡುಪಿ ಮತ್ತು ದಕ್ಷಿಣ ಕನ್ನಡ  ಜಿಲ್ಲೆ . 

ಇಂತಹಾ ಪರಂಪರೆಯುಳ್ಳ ಭೂಭಾಗದಲ್ಲಿ ಸಾವಿರಾರು ವರ್ಷಗಳ ಇತಿಹಾಸವುಳ್ಳ ದೇಗುಲಗಳು, ಬಸದಿಗಳು ಹಲವಾರು. ಇಂತಾಹುದೇ ಒಂದು ಪ್ರಾಚೀನ ದೇವಾಲಯ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಾಲಯ.ಪುಣ್ಯ ನದಿ ಫಲ್ಗುಣಿಯ ದಡದಲ್ಲಿರುವ ಈ ದೇವಾಲಯವನ್ನು ಸುಮೇಧ ಮಹರ್ಷಿಯ ಆಣತಿಯಂತೆ ಸುರಥ ರಾಜ ಮತ್ತು ಸುಮೇಧ ಎಂಬ ವರ್ತಕನು ನಿರ್ಮಿಸಿದರೆಂದು ಪ್ರತೀತಿ.ಸುಮಾರು 10 ಅಡಿ ಎತ್ತರದ ಶ್ರೀ ರಾಜರಾಜೇಶ್ವರಿಯ ಮೃಣ್ಮಯ ಮೂರ್ತಿ ಇಲ್ಲಿನ ವಿಶೇಷ. ಜೊತೆಗೆ ಭದ್ರಕಾಳಿ ,ಗಣೇಶ,ಸುಬ್ರಹ್ಮಣ್ಯರ ಮೃಣ್ಮಯಮೂರ್ತಿಯನ್ನು ಕಾಣಬಹುದು. ಇತಿಹಾಸಗಳ ಪ್ರಕಾರ ಶ್ರೀ ಚಂಡೀ ಹೋಮ ಈ ದೇವಾಲಯದಿಂದ ಪ್ರಾರಂಭವಾಯಿತೆಂದು ಪ್ರತೀತಿ ಹಾಗೂ ಉಲ್ಲೇಖ ಸುಮಾರು 2000 ವರ್ಷಕ್ಕೂ ಮೇಲ್ಪಟ್ಟು ಶ್ರೀ ರಾಜಾರಾಜೇಶ್ವರಿ ಹಾಗೂ ಪರಿವಾರ ದೇವತೆಗಳ ಬೃಹದಾಕಾರದ ಮೃಣ್ಮಯ ಮೂರ್ತಿಗಳ ನಿರ್ಮಾಣವಾಯಿತೆಂದು ಉಲ್ಲೇಖವಿದೆ.

ದೇವಾಲಯದ ಸಮೀಪದಲ್ಲೇ ಇರುವ ಇನ್ನೊಂದು ಮಂದಿರ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ದಿವ್ಯ ವಿಶ್ವಭಾವೈಕ್ಯ ಮಂದಿರ. ಪ್ರಶಾಂತವಾದ ವಾತವರಣದೊಂದಿಗೆ ಮನಸ್ಸಿಗೆ ಶಾಂತಿ ನೀಡುತ್ತಾ ಆದ್ಯಾತ್ಮಿಕ ಸಾಧಕರಿಗೆ ಪ್ರಶಸ್ತ ಜಾಗವೂ ಹೌದು.
ಈ ವಿಶ್ವ ಭಾವೈಕ್ಯ ಮಂದಿರ ನಿರ್ಮಾಣವಾದದ್ದು ಕೇವಲ 9 ವರ್ಷಗಳ ಹಿಂದೆ.ಗುರುದೇವ ಶ್ರೀ ರಾಮಕೃಷ್ಣ ಪರಮಹಂಸರ ಕೃಪಾರ್ಶಿವಾದದಿಂದ ಇಲ್ಲೊಂದು ಆಶ್ರಮ ನಿರ್ಮಾಣವಾಗಿ ಹಳ್ಳಿಗಳಲ್ಲಿ ಶ್ರೀ ರಾಮಕೃಷ್ಣ ಪರಮಹಂಸg, ಶ್ರೀಮಾತೆ ಶಾರದಾ ದೇವಿ ,ಸ್ವಾಮಿ ವಿವೇಕಾನಂದರ ಉಪದೇಶವನ್ನು ಪಸರಿಸಿ ಜನರಿಗೆ ಆದ್ಯಾತ್ಮದ ನಿಜಾನಂದವನ್ನು ನೀಡಬೇಕೆಂದು ಭಾವಿಸಿ ಪೊಳಲಿಯಲ್ಲಿ ರಾಮಕೃಷ್ಣ ತಪೋವನದ ಉಗಮವಾಯ್ತು.ಪ್ರಸ್ತುತ ಸ್ವಾಮಿ ವಿವೇಕಚೈತನ್ಯಾನಂದ ಇವರು ಆಶ್ರಮದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ 9 ವರ್ಷಗಳಿಂದ ರಾಮಕೃಷ್ಣ ತಪೋವನ ಯಾವುದೇ ಫಲಾಪೇಕ್ಷೆ ಇಲ್ಲದೇ ಅಶಕ್ತರಿಗೆ ಸೇವೆ ನೀಡುತ್ತಾ ಬಂದಿದೆ.ಸುಮಾರು 100ಂಕ್ಕೂ ಮಿಕ್ಕಿ ಮಕ್ಕಳು ಆಶ್ರಮದಲ್ಲಿ ಸಂಸ್ಕಾರಯುತ ಶಿಕ್ಷಣವನ್ನು ಉಚಿತವಾಗಿ ಪಡೆದಿದ್ದಾರೆ. ಪ್ರಸ್ತುತ 70 ಮಕ್ಕಳು ಆಶ್ರಮದಲ್ಲಿ ವಸತಿಯುತ ಶಿಕ್ಷಣ ಉಚಿತವಾಗಿ ಪಡೆಯುತ್ತಿದ್ದಾರೆ.

ಸ್ವಾಮಿ ವಿವೇಕಾನಂದರ ವಾಣಿ ” ಆತ್ಮಾನೋ ಮೋಕ್ಷಾರ್ಥಂ ಜಗತ್ ಹಿತಾಯ ಚಃ ” ಎಂಬ ಮಾತು ಸಾಕಾರಗೋಳ್ಳುತ್ತಿದೆ ಎನ್ನುವುದಕ್ಕೆ ಆಶ್ರಮದ ಕಾರ್ಯಕ್ರಮಗಳೇ ಜ್ವಲಂತ ಸಾಕ್ಷಿ. ಸಮೀಪದ ಪ್ರಾಥಮಿಕ ಶಾಲಾ ವಿದ್ಯಾರ್ಥಗಳಿಗೆ ಉಚಿತ ಸಮವಸ್ತ್ರ, ಪುಸ್ತಕ ಜೊತೆಗೆ ಸಮೀಪದ ಸುಮಾರು 5 ಶಾಲೆಗಳಿಗೆ ಉಚಿತ ಪುಸ್ತಕ ಹಾಗೂ ಶೈಕ್ಷಣಿಕ ಪರಿಕರಗಳನ್ನು ಆಶ್ರಮ ವಿತರಿಸುತ್ತಾ ಬಂದಿದೆ.ಸುಮಾರು 5 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ಸೌಲಭ್ಯವನ್ನು ಪಡೆದಿದ್ದಾರೆ.ಊರಿನ ಏಳ್ಗೆಗೆ ಹಾಗು ಸ್ವಚ್ಛತೆಗೆ, ಸ್ವಚ್ಛ ಭಾರತದ ಪರಿಕಲ್ಪನೆಯೊಂದಿಗೆ ಅಶಕ್ತರಿಗೆ ಶೌಚಾಲಯ ನಿರ್ಮಾಣಕ್ಕೆ ನೆರವು ನೀಡುತ್ತಾ ಗ್ರಾಮ ಸ್ವಚ್ಛತೆಗೂ ಆದ್ಯತೆ ನೀಡುತ್ತಿದೆ. ಬಡ ಮಹಿಳೆಯರ ಸಬಲೀಕರಣಕ್ಕೆ ಉಚಿತ ಟೈಲರಿಂಗ್ ತರಬೇತಿ , ಪೇಪರ್ ಕೈಚೀಲ ತಯಾರಿ ತರಬೇತಿ,ಸುಮಾರು 450 ಬಡ ಮಹಿಳೆಯರಿಗೆ ಪ್ರತಿ ವರ್ಷ ಆಶ್ರಮದ ವಾರ್ಷಿಕೋತ್ಸವದಂದು ಉಚಿತ ಸೀರೆ , ಧವಸ ಧಾನ್ಯಗಳನ್ನು,ಊಟದ ತಟ್ಟೆಗಳನ್ನು ವಿತರಿಸಲಾಗುತ್ತಿದೆ.ಜೊತೆಗೆ ಪ್ರತೀ ತಿಂಗಳು ಆಶ್ರಮದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯುತ್ತಿದೆ.

ಡಿಜಿಟಲೀಕರಣಕ್ಕೆ ಪುಷ್ಠಿ ನೀಡಲು ಕಂಪ್ಯೂಟರ್ ತರಬೇತಿ ಕೇಂದ್ರವು ಗ್ರಾಮೀಣ ಭಾಗದ ಜನತೆಗೆ ಬಹಳಷ್ಟು ಉಪಯೋಗವಾಗಿದೆ.ಇವೆಲ್ಲಾ ಸಾಮಾಜಿಕ ಕಾರ್ಯಗಳ ವಿಸ್ತಾರವಾದರೆ ಆದ್ಯಾತಿಕ ವಿಚಾರಗಳಲ್ಲಿ ಆಶ್ರಮ ಉಚ್ಛ ಸ್ಥಾನದಲ್ಲಿ ಬಂದು ನಿಲ್ಲುವುದು .” ಮನೆ ಮನೆಗೆ ಶ್ರೀ ರಾಮಕೃಷ್ಣರ ಸಂದೇಶ” ಎಂಬ ಕಾರ್ಯಕ್ರಮದಂತೆ ಸ್ವಾಮೀಜಿಯವರು ಹಳ್ಳಿಯ ಮನೆಮನೆಗೆ ತೆರಳಿ ಭಜನೆ ಸತ್ಸಂಗಗಳನ್ನು ಕೈಗೊಳ್ಳುತ್ತಾರೆ. ನವರಾತ್ರಿಯ 9 ದಿನ 9 ಕುಮಾರಿಯರಿಗೆ ದೇವಿಯ ಅಲಂಕಾರ ಮಾಡಿಸಿ ಪೂಜೆ ಮಾಡುವ ವಿಶೇಷ ಆಚರಣೆ ಇಲ್ಲಿನ ಸಂಪ್ರದಾಯ. ಈ ವಿಶೇಷ ಸಂದರ್ಭವನ್ನು ಕಣ್ತುಂಬಿಕೊಳ್ಳುವುದು ನಮ್ಮ ಸೌಭಾಗ್ಯವೇ ಸರಿ. ಇನ್ನು ಕೃಷ್ಣ ಜನ್ಮಾಷ್ಟಮಿಯ 3 ದಿನದ ಕಾರ್ಯಕ್ರಮ ,ದಿವ್ಯತ್ರಯರ ಜಯಂತಿಗಳು , ಗುರುಪೂರ್ಣಿಮೆ, ಗಣೇಶ ಚತುರ್ತಿ ಕ್ರಿಸ್ಮಸ್ ,ಆಚರಣೆಗಳು ಒಂದೆಡೆಯಾದರೆ ,ದಿನನಿತ್ಯದ ಬೆಳಗಿನ ಆರತಿ ಪೂಜೆ ಮತ್ತು ಸಂದ್ಯಾರತಿ ,ಆದ್ಯಾತ್ಮಿಕ ಚಿಂತಕರ ಮನ ಸೆಳೆಯುತ್ತದೆ. ಜೊತೆಗೆ ಶಾಲಾ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ ಶಿಕ್ಷಣ ಆದ್ಯಾತ್ಮಿಕ ಶಿಕ್ಷಣದ ಕಾರ್ಯಗಾರಗಳೂ ನಡೆಯುತ್ತಿರುತ್ತವೆ.

ಈ ಲೇಖನದಲ್ಲಿ ಕಂಡು ಬಂದಿರುವ ಅಂಶಗಳೆಲ್ಲವೂ ಕೇವಲ ಪಕ್ಷಿನೋಟವಷ್ಟೆ.ಇನ್ನೂ ಈ ಆಶ್ರಮದ ಕುರಿತು ತಿಳಿಯಬೇಕೆಂದಿದ್ದರೆ ಒಮ್ಮೆಯಾದರೂ ಆಶ್ರಮಕ್ಕೆ ಭೇಟಿ ನೀಡಲೇ ಬೇಕು . ಮನಸ್ಸಿಗೆ ಮುದ ನೀಡುವುದರೊಂದಿಗೆ ಜೀವನೋತ್ಸಾಹವನ್ನು ನೀಡುವ ಸ್ಥಳ ರಾಮಕೃಷ್ಣ ತಪೋವನ ಎಂದರೆ ತಪ್ಪಾಗಲಾರದು. 
ಹೆಚ್ಚಿನ ಮಾಹಿತಿಗೆ  ಆಶ್ರಮದ  ಅಂತರ್ಜಾಲ ತಾಣ.

Pic Credit : suddi9 news Website
www.ramakrishnatapovan.org <http://www.ramakrishnatapovan.org> ಅಥಾವಾ ಮಿಂಚಂಚೆ  ramakrishnatapovan@gmail.com ಅಥವಾ ಮಿಂಚಂಚೆ ಮೂಲಕವೂ ಸಂಪರ್ಕಿಸಬಹುದು.
ಲೇಖನ: ಅಕ್ಷಯ್ ಜಿ ಭಟ್ ಎರ್ಮೆತ್ತೊಡಿ
ಫೋನ್:7795867853

Friday 29 December 2017

ಪ್ರತ್ಯಕ್ಷ ದೈವಕ್ಕೆ ಸಾಷ್ಟಾಂಗ ನಮನ

ಪ್ರತ್ಯಕ್ಷ ದೈವಕ್ಕೆ ಸಾಷ್ಟಾಂಗ ನಮನ
ಅಕ್ಷರ ಸಂತ ,ಬಡಮಕ್ಕಳ ಬಾಳಿನ ಆಶಾಕಿರಣ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಮೂಲ ರೂವಾರಿ ಕರ್ಮಯೋಗಿಗೆ ಸಾಷ್ಟಾಂಗ ನಮನ ಅರ್ಥಾತ್ ಹುಟ್ಟು ಹಬ್ಬದ ಶುಭಾಶಯಗಳು
ಹೌದು ತಾಯಿ ರಾಜರಾಜೇಶ್ವರಿಯು ನೆಲೆಯೂರಿರುವ ಪುಟ್ಟ ಊರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ ತಾಲೂಕಿನ ಪೊಳಲಿ, ಒಂದು ದಶಕದ ಹಿಂದೆ ಆ ಪುಟ್ಟ ಗ್ರಾಮದ ಆಶಾಕಿರಣವೆಂಬಂತೆ ಅಲ್ಲೊಂದು ಪುಟ್ಟ ಆಶ್ರಮ ಪ್ರಾರಂಭವಾಯಿತು. ಆಶ್ರಮದ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳು ಶಾಲೆ ಕಾಲೇಜಿನ ಮೆಟ್ಟಿಲು ಹತ್ತುವಂತಾಯಿತು. ಪುಟ್ಟ ಹಳ್ಳಿಯ ಮಕ್ಕಳಿಗೂ ಆಶಾಕಿರಣವೆಂಬಂತೆ ವಿದ್ಯಾರ್ಥಿಗಳಿಗೆ ಪುಸ್ತಕ ,ಶಾಲಾ ಖರ್ಚು ಇತ್ಯಾದಿ ವೆಚ್ಚಗಳನ್ನು ಆಶ್ರಮದ ಮೂಲಕ ನೀಡಿ ಎಲ್ಲರಿಗೂ ಆಶಾಕಿರಣವಾದವರು ಅಂತಹ ಮಾಹಾನ್ ವ್ಯಕ್ತಿ ಹುಟ್ಟಿದ ದಿನ ಇಂದು .

ಕೆಲವರು ಆ ಮಹಾತ್ಮನನ್ನು ನಿಂಧಿಸಿದರೂ
ಇನ್ನು ಕೆಲವರು ನಂಬಿಕೆ ದ್ರೋಹವನ್ನೇ ಬಗೆದರು
ಇನ್ನು ಕೆಲವರು ಮುಂದಿನಿಂದ ಚೆನ್ನಾಗಿ ಮಾತನಾಡಿ ಹಿಂದಿನಿಂದ ಉಗಿದದ್ದು ಇದೆ
ಆದರೂ ಅದ್ಯಾವುದನ್ನೂ ಲೆಕ್ಕಿಸದೆ " ಜೀವ ಸೇವೆಯೇ ಶಿವ ಸೇವೆ" ಎಂಬ ಸ್ವಾಮಿ ವಿವೇಕಾನಂದರ ವಾಣಿಯನ್ನು ಪರಿಪಾಲಿಸುತ್ತ ಬಂದವರು,
ಜೀವನ ಮುಕ್ತಿಗಾಗಿ ತನ್ನೆಲ್ಲ ಪದವಿಯನ್ನು ಶ್ರೀ ರಾಮಕೃಷ್ಣ ಪರಮಹಂಸರ ಪಾದತಲಗಳಲ್ಲಿ ಅರ್ಪಿಸಿ ಶರಣು ಶರಣಾರ್ಥಿ ಎಂದು ಜೀವನದ ಪರಮ ಧ್ಯೇಯದ ಕಡೆ ಹೆಜ್ಜೆಯಿಟ್ಟಿರುವ ನನ್ನ ದೇವನೇ ನಿಮಗೆ ಶರಣು ಶರಣೆಂದೆ .
ಅಕ್ಷಯ್ ಜಿ ಭಟ್
ಹಳೆ ವಿದ್ಯಾರ್ಥಿ
ರಾಮಕೃಷ್ಣ ತಪೋವನ ಪೊಳಲಿ