ಹೌದು ... ಅದೆಷ್ಟೋ ಬಡ ಜನರ ಬಾಳಿನ ಆಶಾಕಿರಣವಾಗಿ ಪೊಳಲಿ ಸಮೀಪದ ಜನರ ಕಣ್ಮಣಿಯಾಗಿ ದೀನದಲಿತರ ಬಾಳಿನ ಆಶಾಕಿರಣವಾಗಿ, ಸದಾ ಜನರ ಸೇವೆಗೆ ಸಿದ್ಧವಿರುವ ಆಶ್ರಮ ಅದುವೇ ಶ್ರೀ ರಾಮಕೃಷ್ಣ ತಪೋವನ ...
ಸ್ವಾಮಿ ವಿವೇಕಾನಂದರ ವಾಣಿಯಾದ " ಆತ್ಮನೋ ಮೋಕ್ಷಾರ್ಥ ಜಗತ್ ಹಿತಾಯ ಚ "ಎಂಬ ಮಾತಿನಂತೆ ನೊಂದವರ ಬಾಳಿನ ಜ್ಯೋತಿಯಾಗಿ ಪೊಳಲಿ ಆಸುಪಾಸಿನ ಹಲವಾರು ಬಡ ವಿದ್ಯಾರ್ಥಿಗಳು ಕಾಲೇಜು ಫೀಸು ಕಟ್ಟಲಾಗದೆ ತಮ್ಮ ವಿದ್ಯಾಭ್ಯಾಸ ಮೊಟಕುಗೊಳಿಸುವ ಸಂದರ್ಭ ಬಂದಾಗ ಅವರ ಬೆನ್ನೆಲುಬಾಗಿ ನಿಂತದ್ದು ರಾಮಕೃಷ್ಣ ತಪೋವನ ....
ಇದೀಗ ಆ ತಪೋವನ ನೀಡಿದ ಕೊಡುಗೆಗೆ ಸ್ವಲ್ಪವಾದರೂ ಕೃತಜ್ಞತೆಯನ್ನು ಸಲ್ಲಿಸುವ ಮನೋ ಅಭಿಲಾಷೆ ನಿಮಗಿದ್ದರೆ, ಅಂತಹ ಸುವರ್ಣ ಸಂದರ್ಭ ನಿಮಗೆ ಬಂದೊದಗಿದೆ... ರಾಮಕೃಷ್ಣ ತಪೋವನ ನಿಮಗೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳುವ ಸದಭಿಲಾಷೆ ನಿಮಗಿದ್ದಲ್ಲಿ ನೀವು ಮಾಡಬೇಕಾದದ್ದು ಇಷ್ಟೇ ... ನೀವು ರಾಮಕೃಷ್ಣ ತಪೋವನದಿಂದ ಯಾವ ರೀತಿ ಪ್ರಯೋಜನವನ್ನು ಪಡೆದಿದ್ದೀರಿ ಮತ್ತು ಅದರಿಂದ ನಿಮಗೆ ಯಾವ ರೀತಿ ಉಪಯೋಗವಾಗಿದೆ ಎಂದು ನೀವು ಒಂದು ನಿಮಿಷದ ಸೆಲ್ಫಿ ವಿಡಿಯೋ ಮಾಡಿ ನಮ್ಮ ವಾಟ್ಸಪ್ ನಂಬರ್ ಗೆ ಕಳುಹಿಸಿ. ನಮ್ಮ ವಾಟ್ಸಾಪ್ ಸಂಖ್ಯೆ : ೭೭೯೫೮೬೭೮೫೩,
ನೆನಪಿರಲಿ : ನಿಮ್ಮ ಒಂದು ಕೃತಜ್ಞತೆಯು ನಮಗೆ ಸಾವಿರ ವರವಿದ್ದಂತೆ ಮತ್ತು ಇನ್ನಷ್ಟು ಸೇವಾ ಕಾರ್ಯ ಮಾಡಲು ಸ್ಫೂರ್ತಿಯಾಗಬಹುದು ........
ಜೈ ರಾಮಕೃಷ್ಣ